ಬೆಂಗಳೂರು: ವಿಶ್ವ ಸಂವಾದ ಕೇಂದ್ರ (VSK), ಕರ್ನಾಟಕ ಇದರ 25ನೇ ವರ್ಷದ ನಿಮಿತ್ತ ‘ಸ್ನೇಹಮಿಲನ’ ಕಾರ್ಯಕ್ರಮವನ್ನು ಅಗಸ್ಟ್ 29, 2026ರ ಶನಿವಾರ ಸಂಜೆ 6:30ಕ್ಕೆ ನಗರದ ನೃಪತುಂಗ ರಸ್ತೆಯಲ್ಲಿರುವ ‘ದಿ ಮಿಥಿಕ್ ಸೊಸೈಟಿ’ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖರಾದ ಶ್ರೀ ಸುಧೀರ್ ಹಾಗೂ ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ವಿ. ನಾಗರಾಜ್ ಮುಖ್ಯ ಉಪಸ್ಥಿತರಿರಲಿದ್ದಾರೆ.
ಇದೇ ವೇದಿಕೆಯಲ್ಲಿ ಹಿರಿಯ ಲೇಖಕರಾದ ಶ್ರೀ ನಾರಾಯಣ ಶೇವಿರೆ ಅವರು ರಚಿಸಿರುವ ‘ಹಿಂದುತ್ವ’, ‘ಭಾರತ’ ಮತ್ತು ‘ಸ್ವತ್ವ’ ಕುರಿತಾದ ಮೂರು ಪ್ರಮುಖ ಕಿರುಪುಸ್ತಕಗಳು ಲೋಕಾರ್ಪಣೆಗೊಳ್ಳಲಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.
