ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಾಬ್ದಿ ವರ್ಷದ ಅಂಗವಾಗಿ ನಗರದ ರಾಮ ಮಂದಿರ ಉಪನಗರದ ವತಿಯಿಂದ ಸ್ಥಳೀಯ ವಿವೇಕಾನಂದ ವಿದ್ಯಾ ನಿಕೇತನ ಕಾಲೇಜು ಆವರಣದಲ್ಲಿ ಯುವ ಸಮ್ಮೇಳನವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಭಾಗವಾಗಿ 18 ರಿಂದ 30 ವರ್ಷದೊಳಗಿನ ಯುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಕಬ್ಬಡ್ಡಿ, ಲಗೋರಿ ಮತ್ತು ಹಗ್ಗ ಜಗ್ಗಾಟದಂತಹ ದೇಸಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ಯುವಕರಲ್ಲಿ ಉತ್ಸಾಹ ಮತ್ತು ಸಂಘಟನಾತ್ಮಕ ಭಾವನೆ ಮೂಡಿಸಲು ಈ ಆಟಗಳು ಸಹಕಾರಿಯಾದವು.
ಆಟಗಳ ನಂತರ ನಡೆದ ಬೌದ್ಧಿಕ ಸತ್ರದಲ್ಲಿ ವಿಭಾಗ ಸಂಪರ್ಕ ಪ್ರಮುಖರಾದ ಶ್ರೀ ಸಾಗರ ಸತ್ಯಾಲಕರ ಅವರು ಪ್ರಮುಖ ವಕ್ತಾರರಾಗಿ ಮಾತನಾಡಿದರು. “ಪ್ರಸ್ತುತ ದೇಶದಲ್ಲಿ ಆಗುತ್ತಿರುವ ಧನಾತ್ಮಕ ಬೆಳವಣಿಗೆಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಾದು ಬಂದ ಸವಾಲಿನ ಹಾದಿ” ಕುರಿತು ಯುವಕರಿಗೆ ಮಾರ್ಗದರ್ಶನ ನೀಡಿದರು.
ರಾಮ ಮಂದಿರ ಉಪನಗರದಿಂದ ಸುಮಾರು 140ಕ್ಕೂ ಹೆಚ್ಚು ಯುವಕರು ಈ ಸಮ್ಮೇಳನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಅವಿನಾಶ ಕುಲಕರ್ಣಿ, ಗುರುರಾಜ ದೇಶಪಾಂಡೆ, ಸುಧಾಕರ ಉಡಬಾಳಕರ, ವಿಜಯ, ಏಕನಾಥ್ ಸೋಮಯಾಜಿ, ವಿನೋದ ಸಾಥಖೇಡ, ಪ್ರದೀಪ ಕುಲ್ಕರ್ಣಿ, ಪ್ರವೀಣ, ಆದರ್ಶ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
