ನವದೆಹಲಿ: ವಿಶ್ವ ಹಿಂದೂ ಪರಿಷತ್ (VHP) ಅಂತಾರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಸಿದ್ಧ ನ್ಯಾಯವಾದಿ ಅಲೋಕ್ ಕುಮಾರ್ ಅವರಿಗೆ ಶ್ರೀ ಪೇಜಾವರ ಮಠ ಸಂಸ್ಥಾನದ ವತಿಯಿಂದ ನೀಡಲಾಗುವ ‘ಧರ್ಮಭೂಷಣ’ ಬಿರುದಿನ ವಿಶೇಷ ಪುರಸ್ಕಾರವನ್ನು ಘೋಷಿಸಲಾಗಿದೆ.
ದೇಶ-ವಿದೇಶಗಳಲ್ಲಿ ಸನಾತನ ಧರ್ಮದ ರಕ್ಷಣೆ, ಪ್ರಚಾರ ಹಾಗೂ ಧಾರ್ಮಿಕ ಜಾಗೃತಿಗಾಗಿ ಅವರು ಸಲ್ಲಿಸುತ್ತಿರುವ ದೀರ್ಘಕಾಲದ ಮಹತ್ವಪೂರ್ಣ ಕೈಂಕರ್ಯ ಮತ್ತು ಮಾರ್ಗದರ್ಶನವನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ ಎಂದು ಪೇಜಾವರ ಮಠ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸ್ತುತ ನವದೆಹಲಿಯಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 39 ನೇ ಚಾತುರ್ಮಾಸ್ಯ ವ್ರತ ಸತ್ರ ನಡೆಯುತ್ತಿದ್ದು, ಇದರ ಅಂಗವಾಗಿ ಬರುವ ಸೆಪ್ಟೆಂಬರ್ 2 ರಂದು ಸಂಜೆ ವಸಂತ್ ಕುಂಜ್ನಲ್ಲಿರುವ ವೇದವ್ಯಾಸ ಗುರುಕುಲದಲ್ಲಿ “ಸಂತ ಸಂಗಮ” ಎಂಬ ಸಾಧು-ಸಂತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಧಾರ್ಮಿಕ ಸಭೆಯಲ್ಲಿ ಶ್ರೀಪಾದರ ದಿವ್ಯ ಹಸ್ತದಿಂದ ಅಲೋಕ್ ಕುಮಾರ್ ಅವರಿಗೆ ‘ಧರ್ಮಭೂಷಣ’ ಪುರಸ್ಕಾರ ಪ್ರದಾನ ಮಾಡಲಾಗುವುದು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
