ವಂದೇ ಮಾತರಂ ಹಾಡನ್ನು ಅರ್ಧಕ್ಕೆ ನಿಲ್ಲಿಸಲು ಕಾಂಗ್ರೆಸ್ ನಾಯಕರ ಪ್ರಯತ್ನದ ವೀಡಿಯೋ ಎರಡು ದಿನದಿಂದ ವೈರಲ್ ಆಗ್ತಾ ಇದೆ.
ಇಲ್ಲ, ಕಾಂಗ್ರೆಸ್ ನಾಯಕರು ತೀರ ಈ ಮಟ್ಟಕ್ಕೆ ಇಳಿಯಲಿಕ್ಕಿಲ್ಲ, ವೀಡಿಯೋ ಫೇಕ್ ಇರಬಹುದು ಅಂತ ಯೋಚಿಸುತ್ತಿರುವ ಕಾಲದಲ್ಲಿ… ದೇಶದ ಗೃಹ ಮಂತ್ರಿಗಳು “ಇದು ಫೇಕ್ ಅಲ್ಲ, ಕಾಂಗ್ರೆಸ್ ನಾಯಕರು ಮಾಡಿದ ಪ್ರಮಾದ” ಎಂದು ಸ್ಪಷ್ಟಪಡಿಸಿ ಖಂಡಿಸಿದ್ದಾರೆ.

ಕಾಂಗ್ರೆಸ್ ಮತ್ತೆ ಮತ್ತೆ ಇಂತಹ ಪ್ರಮಾದ ಮಾಡಿ, ದೇಶದ ಜನ ಮಾನಸದಿಂದ ದೂರ ಆಗ್ತಾ ಇದೆ, ನಾಶ ಆಗ್ತಾ ಇದೆ.
ಕಾಂಗ್ರೆಸ್ ನಾಯಕರು ದ್ವೇಷ ಮನಸ್ಥಿತಿಯನ್ನು ಬದಲಿಸಿಕೊಂಡು, ಪ್ರಬುದ್ಧತೆಯನ್ನು, ಪ್ರಜ್ಞಾವಂತಿಕೆಯನ್ನು, ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳದೇ ಹೋದರೆ… ಕಾಂಗ್ರೆಸ್ನ್ನು ಯಾರೂ ಉಳಿಸುವುದಕ್ಕೆ ಸಾಧ್ಯವಿಲ್ಲ.
- ಅರವಿಂದ ಸಿಗದಾಳ್, ಮೇಲುಕೊಪ್ಪ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
