ಕನ್ಯಾಕುಮಾರಿ: ವಿವೇಕಾನಂದ ಕೇಂದ್ರದ ಅಧ್ಯಕ್ಷ ಶ್ರೀ ಎ. ಬಾಲಕೃಷ್ಣನ್ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಶ್ರೀ ಬಾಲಕೃಷ್ಣನ್ ಅವರು ಕರ್ಮಯೋಗದ ಜೀವಂತ ನಿದರ್ಶನವಾಗಿದ್ದರು. ಸ್ವಾಮಿ ವಿವೇಕಾನಂದರ ವಿಶ್ವಬಂಧುತ್ವ ಮತ್ತು ಮಾನವ ಸೇವೆಯ ಸಂದೇಶವನ್ನು ಪ್ರಸಾರ ಮಾಡಲು ಹಾಗೂ ದೇಶ ಮತ್ತು ಸಮಾಜದ ಸೇವೆಗೆ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರ ಸರಳ ಜೀವನಶೈಲಿ, ನಿಸ್ವಾರ್ಥ ಸೇವೆ, ತ್ಯಾಗ ಮನೋಭಾವ ಮತ್ತು ಹಿಂದುತ್ವದ ಮೇಲಿನ ಅಚಲ ಭಕ್ತಿ ಸಾಮಾಜಿಕ ಕರ್ತೃಗಳಿಗೆ ಎಂದೆಂದಿಗೂ ಸ್ಪೂರ್ತಿಯ ಸೆಲೆಯಾಗಿರಲಿದೆ.
ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರದ ಜೀವನ್ವ್ರತಿ (ಆಜೀವ ಸಮರ್ಪಿತ ಕಾರ್ಯಕರ್ತರ) ಪಡೆಯ ಮೊದಲ ಪೀಳಿಗೆಯ ನಾಯಕರಾಗಿದ್ದ ಅವರು, ಸ್ವಾಮಿ ವಿವೇಕಾನಂದರ ಧೈಯೋದ್ದೇಶಗಳನ್ನು ಮುನ್ನಡೆಸಲು ಶ್ರಮಿಸಿದ್ದರು. ಅವರ ಅಗಲಿಕೆಯಿಂದ ದೇಶ ಮತ್ತು ಸಮಾಜವು ಒಬ್ಬ ಶ್ರೇಷ್ಠ ಹಾಗೂ ಪವಿತ್ರ ಆತ್ಮವನ್ನು ಕಳೆದುಕೊಂಡಂತಾಗಿದೆ.
“ಅಗಲಿದ ಶ್ರೇಷ್ಠ ಚೇತನ ಶ್ರೀ ಬಾಲಕೃಷ್ಣನ್ ಅವರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇವೆ. ಈ ಪುಣ್ಯಾತ್ಮನಿಗೆ ಸದ್ಗತಿ ಮತ್ತು ಮೋಕ್ಷ ಪ್ರಾಪ್ತಿಯಾಗಲಿ ಎಂದು ಸರ್ವಶಕ್ತನಾದ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಓಂ ಶಾಂತಿ,” ಎಂದು ಆರ್ಎಸ್ಎಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ತಮ್ಮ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
